ದೃಢ
ಕರ್ನಾಟಕದ
ಶಿಲ್ಪಿ
ಡಿ.ಕೆ. ಶಿವಕುಮಾರ್ ಕರ್ನಾಟಕದ ಕ್ರಿಯಾಶೀಲ ಮತ್ತು ವಿನೂತನ ಆಲೋಚನೆಗಳೊಂದಿಗೆ ಮುನ್ನಡೆಯುವ ಪ್ರಭಾವಿ ನಾಯಕ. ಅವರು ಪ್ರಸ್ತುತ ಸಮಸ್ಯೆಗಳಿಗೆ ಪರಿಣಾಮಕಾರಿಯಾದ ಪರಿಹಾರಗಳನ್ನು ಕಂಡುಹಿಡಿದು, ಕಾರ್ಯಕ್ಷಮತೆಯಿಂದ ಹಿಡಿದ ಕೆಲಸಗಳನ್ನು ಪೂರ್ಣಗೊಳಿಸುವವರು. ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವದ ನಡುವೆ ಸಮತೋಲನವನ್ನು ಕಾಪಾಡಿಕೊಂಡು, ಕರ್ನಾಟಕದ ವಿವಿಧ ಕ್ಷೇತ್ರಗಳನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹಾಗಾಗಿ ಅವರು ರಾಜ್ಯ ಮತ್ತು ರಾಜ್ಯದ ಜನತೆಗೆ ನೂತನ ಅವಕಾಶಗಳನ್ನು ಒದಗಿಸಿಕೊಡುವ ಪ್ರಗತಿಪರ ನಾಯಕ.
ನಮ್ಮ ಗ್ಯಾರಂಟಿ
ಸಮಾಜದ ಪ್ರತಿಯೊಂದು ವರ್ಗದ ಅಗತ್ಯತೆಗಳನ್ನು ಪೂರೈಸಲು ಜಾರಿಗೆ ತರಲಾದ ಗ್ಯಾರಂಟಿ ಯೋಜನೆಗಳು, ಕರ್ನಾಟಕದಲ್ಲಿ ಗಾಂಧಿ ತತ್ವಗಳನ್ನು ಅನುಸರಿಸುತ್ತಿದೆ.





ಕ್ರಿಯೆಗಳು ಮಾತಿಗಿಂತ ಬಲವಾಗಿವೆ
ಕರ್ನಾಟಕದ ಪ್ರಗತಿಯ ವೇಗವರ್ಧಕ, ನಾಲ್ಕು ದಶಕಗಳಿಂದ ದೂರದೃಷ್ಟಿಯ ಕಾರ್ಯಗಳನ್ನು ತಕ್ಷಣದ ಕ್ರಿಯೆಯಾಗಿ ಪರಿವರ್ತಿಸುತ್ತಿರುವ ನಾಯಕ. ಭೂತಕಾಲ ಮತ್ತು ವರ್ತಮಾನದಲ್ಲಿ ಅಪಾರ ಸಾಧನೆಗಳ ಅಡಿಗಲ್ಲು ನಿರ್ಮಿಸಿರುವವರು. ಹೊಸತನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಗತಿಪರ ಹಾಗೂ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತಾ ಭವಿಷ್ಯದತ್ತ ದೃಷ್ಟಿ ಕೇಂದ್ರೀಕರಿಸುತ್ತಿದ್ದಾರೆ.

ಕರ್ನಾಟಕದ ಇಂಧನ ಸಚಿವರಾಗಿ ಶಕ್ತಿಯುತ ಕಾರ್ಯಕ್ಷಮತೆ.

ಕರ್ನಾಟಕದ ಬೃಹತ್ ನೀರಾವರಿ ಸಚಿವರಾಗಿ ಜಲಭದ್ರತೆ.

ನಗರಾಭಿವೃದ್ಧಿ ಸಚಿವರಾಗಿ ವೇಗದ ಬೆಳವಣಿಗೆ.

ಉಪ ಮುಖ್ಯಮಂತ್ರಿಯಾಗಿ ಕರ್ನಾಟಕದ ಬೆಳವಣಿಗೆಯ ಉತ್ಪ್ರೇರಕ.

ಉಪ ಮುಖ್ಯಮಂತ್ರಿಯಾಗಿ ಹೂಡಿಕೆ ಪರಿಸರ ವ್ಯವಸ್ಥೆಯ ವಿಸ್ತರಣೆ
ಕಾರ್ಯವೀರ ಡಿಕೆಎಸ್





ನಡೆದು ಬಂದ ಹಾದಿ
ದಶಕಗಳ ಕರ್ನಾಟಕದ ಅಭಿವೃದ್ಧಿ ಜನರ ಜೀವನಮಟ್ಟವನ್ನು ಸುಧಾರಿಸಿದೆ. ಪ್ರಗತಿಪರ ಕರ್ನಾಟಕಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಿರಂತರ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ ಡಿ.ಕೆ.ಶಿವಕುಮಾರ್.
1980s
ಆರಂಭಿಕ ದಿನಗಳು
- ವಿದ್ಯಾರ್ಥಿ ನಾಯಕತ್ವ: ಕಾಲೇಜಿನಲ್ಲಿ ಯುವ ಕಾಂಗ್ರೆಸ್ ನಾಯಕರಾಗಿ ರಾಜಕೀಯ ಪ್ರವೇಶ
1985-90

ರಾಜ್ಯ ರಾಜಕೀಯ ಪ್ರವೇಶ
ಮೊದಲ ಚುನಾವಣಾ ಸ್ಪರ್ಧೆ: ಸಾತನೂರು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ, ಎಚ್.ಡಿ. ದೇವೇಗೌಡರ ವಿರುದ್ಧ ಸೋಲು.
ಉಪಚುನಾವಣೆ ಗೆಲುವು: ಸಾತನೂರು ಉಪಚುನಾವಣೆಯಲ್ಲಿ ಜಯ ಸಾಧಿಸಿ ನಾಯಕತ್ವದ ಅಡಿಪಾಯ ಹಾಕಿದರು.
1990-92
ಕಾರಾಗೃಹ ಸಚಿವರು
- ವೃತ್ತಿ ತರಬೇತಿ: ಅಪರಾಧಿಕ ಚಟುವಟಿಕೆಗಳಿಂದ ಹೊರ ತರಲು ಕೈದಿಗಳಿಗೆ ವೃತ್ತಿಪರ ಕೌಶಲ್ಯಗಳ ತರಬೇತಿ
- ಕಾರಾಗೃಹ ಸುಧಾರಣೆಗಳು: ಕೈದಿಗಳ ಪುನರ್ವಸತಿ ಮತ್ತು ಜೀವನ ಪರಿಸ್ಥಿತಿಗಳ ಸುಧಾರಣೆ
- ವಸ್ತುಸಂಗ್ರಹಾಲಯ ಸ್ಥಾಪನೆ: ಬೆಂಗಳೂರಿನಲ್ಲಿ ನವೀಕೃತ ವಸ್ತುಸಂಗ್ರಹಾಲಯ ನಿರ್ಮಾಣ
1999-2004
ನಗರಾಭಿವೃದ್ಧಿ ಸಚಿವರು
- ಸ್ಥಳೀಯ ಆಡಳಿತ ಬಲವರ್ಧನೆ: ನಗರ ಸಂಸ್ಥೆಗಳಿಗೆ ಹೆಚ್ಚು ಸ್ವಾಯತ್ತತೆ ನೀಡಿ ಸೇವೆಗಳ ಸುಧಾರಣೆ
- ವಸತಿ ಯೋಜನೆಗಳು: ಬಡವರಿಗಾಗಿ ಕೈಗೆಟುಕುವ ವಸತಿಗೆ ಉತ್ತೇಜನ
- ಹಸಿರು ಅಭಿವೃದ್ಧಿ: ನಗರ ಪರಿಸರದ ಸಮತೋಲನಕ್ಕಾಗಿ ಹಸಿರು ಪ್ರದೇಶಗಳ ವೃದ್ಧಿ
- ಸಮುದಾಯಗಳ ತೊಡಗಿಸಿಕೊಳ್ಳುವಿಕೆ: ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಮೂಲಕ ಸಮಗ್ರ ನಗರ ಯೋಜನೆ
- ಬಿಎಟಿಎಫ್: ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್(ಬಿಟಿಎಫ್) ಮೂಲಕ ಬೆಂಗಳೂರಿನ ಆಡಳಿತ ಸುಧಾರಣೆ ಮತ್ತು ನಗರದ ಸವಾಲುಗಳ ನಿರ್ವಹಣೆ
- ಮೂಲಸೌಕರ್ಯಗಳ ಅಭಿವೃದ್ಧಿ: ಕೆ.ಆರ್.ಮಾರುಕಟ್ಟೆ ಫ್ಲೈಓವರ್ ಸೇರಿದಂತೆ ಪ್ರಮುಖ ಯೋಜನೆಗಳು ಕಾರ್ಯಗತ
- ಯುವ ಸಬಲೀಕರಣ: ಗ್ರಾಮೀಣ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಹೆಚ್ಚಿಸಲು ‘ಯುವಶಕ್ತಿ’ ಯೋಜನೆ
- ನಗರ ವಿಸ್ತರಣೆ: ಬೆಂಗಳೂರು ಸಮನಾಂತರವಾಗಿ ಸುಸ್ಥಿರ ಯೋಜನೆಗಳೊಂದಿಗೆ ಹೊಸ ನಗರಗಳ ವೃದ್ಧಿ
2008-10

ಕೆಪಿಸಿಸಿ ಕಾರ್ಯಾಧ್ಯಕ್ಷ
- ಪಕ್ಷ ಸಂಘಟನೆ: ಕಾಂಗ್ರೆಸ್ ಪಕ್ಷದ ಶಕ್ತಿ ಹೆಚ್ಚಿಸುವ ಹಾಗೂ ಚುನಾವಣಾ ತಂತ್ರ ರೂಪಿಸುವ ಕಾರ್ಯ
2014-18
ಇಂಧನ ಸಚಿವರು
- ಎಲ್ಇಡಿ ಬೀದಿ ದೀಪಗಳು: ಶೇಕಡಾ 40% ವಿದ್ಯುತ್ ಉಳಿತಾಯದ ಯೋಜನೆ
- ಇವಿ ಚಾರ್ಜಿಂಗ್ ಕೇಂದ್ರಗಳು: ಪ್ರಮುಖ ನಗರಗಳಲ್ಲಿ ವಿದ್ಯುತ್ ವಾಹನ ಚಾರ್ಜಿಂಗ್ ವ್ಯವಸ್ಥೆ
- ಹಸಿರು ಶಕ್ತಿ ಉತ್ತೇಜನ: ನವೀಕರಿಸಬಹುದಾದ ಇಂಧನ ಹೂಡಿಕೆ ಸುಗಮಗೊಳಿಸಲು ಜಿಟಿಎಎಂ (GTAM) ಅಭಿವೃದ್ಧಿ
- ವಿದ್ಯುತ್ ವಿತರಣೆಯಲ್ಲಿ ಸುಧಾರಣೆ: ಬೆಸ್ಕಾಂ ಸೇರಿದಂತೆ ವಿದ್ಯುತ್ ಕಂಪನಿಗಳ ಕಾರ್ಯಕ್ಷಮತೆಯಲ್ಲಿ ವೃದ್ಧಿ
- ಸೌರಶಕ್ತಿ ನಾಯಕತ್ವ: 150 ಎಂವಿಯ ಸಾಮರ್ಥ್ಯದೊಂದಿಗೆ ಕರ್ನಾಟಕವನ್ನು ದೇಶದ ಪ್ರಮುಖ ಸೌರಶಕ್ತಿ ರಾಜ್ಯವನ್ನಾಗಿ ಮಾಡಿದ ಸಾಧನೆ
- ಜಲ ಸಂರಕ್ಷಣೆ: ‘ವಾಟರ್ ಕ್ರಾಲ್’ ಆಪ್ ಮೂಲಕ ನೀರಿನ ಬಳಕೆ ಮೇಲ್ವಿಚಾರಣೆ
- ಸೌರ ಪಂಪ್ಗಳು: ರೈತರ ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಲು 1,000 ಸೌರ ಪಂಪ್ಗಳ ಸ್ಥಾಪನೆ
2018-19
ನೀರಾವರಿ ಸಚಿವರು
- ರೈತರ ಕಲ್ಯಾಣ: ಕೃಷಿಗೆ ಸಂಬಂಧಿಸಿದ ನೀರಾವರಿ ಯೋಜನೆಗಳ ಅಭಿವೃದ್ಧಿ
- ನೀರಾವರಿ ವ್ಯವಸ್ಥೆ ಆಧುನೀಕರಣ: ಪರಿಣಾಮಕಾರಿ ನೀರಿನ ಬಳಕೆಗಾಗಿ ನೀರಾವರಿ ವ್ಯವಸ್ಥೆಗಳ ಪುನರ್ನಿರ್ಮಾಣ
- ಕಮಾಂಡ್ ಪ್ರದೇಶ ಅಭಿವೃದ್ಧಿ: ನೀರಾವರಿ ದಕ್ಷತೆಯನ್ನು ಹೆಚ್ಚಿಸುವ ಯೋಜನೆಗಳ ಅನುಷ್ಠಾನ
- ಜಲ ನಿರ್ವಹಣೆ: ಸುಸ್ಥಿರ ನೀರಿನ ಬಳಕೆಗೆ ಒತ್ತು
- ಈ ದೀರ್ಘಕಾಲಿಕ ಪ್ರಯತ್ನಗಳು ಕರ್ನಾಟಕದ ಪ್ರಗತಿಯನ್ನು ನಿರಂತರವಾಗಿ ಮುನ್ನಡೆಸುತ್ತಿವೆ
2020…

ಕೆಪಿಸಿಸಿ ಅಧ್ಯಕ್ಷರು
- ಕಾಂಗ್ರೆಸ್ ಪುನರುಜ್ಜೀವನ: ಸತತ ಸೋಲುಗಳ ನಂತರ ಕರ್ನಾಟಕದಲ್ಲಿ ಪಕ್ಷದ ಭವಿಷ್ಯವನ್ನು ಪುನರುಜ್ಜೀವನ
2023…

ಉಪ ಮುಖ್ಯಮಂತ್ರಿಗಳು
- ಆರೋಗ್ಯ ರಕ್ಷಣೆ: ವೈದ್ಯಕೀಯ ಕಾಲೇಜುಗಳು ಅಭಿವೃದ್ಧಿ ಮತ್ತು ಗ್ರಾಮೀಣ ಆರೋಗ್ಯ ಸುಧಾರಿಸುವತ್ತ ಗಮನ
- ನಾಗರಿಕ ತೊಡಗಿಸಿಕೊಳ್ಳುವಿಕೆ: ನಾಗರಿಕರ ಕಳವಳಗಳಿಗೆ ತ್ವರಿತ ಪರಿಹಾರ ನೀಡಲು ಆದ್ಯತೆ
- ಇ-ಖಾತಾ: ಉತ್ತಮ ದಕ್ಷತೆಗಾಗಿ ಡಿಜಿಟಲ್ ಆಸ್ತಿ ನಿರ್ವಹಣೆ ಪ್ರಾರಂಭ
- ನಂಬಿಕೆ ನಕ್ಷೆ: ಸಣ್ಣ ಆಸ್ತಿಗಳಿಗೆ ಕಟ್ಟಡ ಯೋಜನೆ ಅನುಮೋದನೆ ಪ್ರಕ್ರಿಯೆ ಸರಳ
- ಎತ್ತಿನ ಹೊಳೆ ಯೋಜನೆ: 7 ಜಿಲ್ಲೆಗಳಿಗೆ 23,251.66 ಕೋಟಿ ರೂಪಾಯಿಗಳ ಯೋಜನೆ ಸಾಕಾರ
- ನಿಮ್ಮ ಮನೆ ಬಾಗಿಲಿಗೆ ಸರ್ಕಾರ: ವೇಗವಾಗಿ ದೂರುಗಳನ್ನು ಬಗೆಹರಿಸಲು ಸೇವಾ ಕಾರ್ಯಕ್ರಮ ಆರಂಭ
- ಮೂಲಸೌಕರ್ಯ: ಸುಸ್ಥಿತಿಯ ರಸ್ತೆಗಳಿಗೆ ಆದ್ಯತೆ
- ಜಲ ಸಂರಕ್ಷಣೆ: “ಜಲ ಕ್ರಾಲ್” ಅಪ್ಲಿಕೇಶನ್ ಮೂಲಕ ಸಂರಕ್ಷಣೆ ಮುಂದುವರಿಕೆ
- ಇವಿ ಉಪಕ್ರಮಗಳು: ಇವಿ ಚಾರ್ಜಿಂಗ್ ಮೂಲಸೌಕರ್ಯಕ್ಕೆ ಬೆಂಬಲ
YES DKS
NEWSROOM
Karnataka's secure future and our peoples welfare is our top priority, and we are united in guaranteeing that. pic.twitter.com/sNROprdn5H
— DK Shivakumar (@DKShivakumar) May 18, 2023
TRENDING
Press